Thursday, 25 December 2014

ಹಸ್ತದಲ್ಲಿಲ್ಲಾ ಹಣೆಬರಹಾ

ಹಸ್ತದಲ್ಲಿಲ್ಲ ಹಣೆಬರಹ,
ಕಾರಣವಲ್ಲ ವಿಧಿಬರಹ.

ಮನದಿ ವಿಶ್ವಾಸ ನೆಲಸಲಿ ಸದಾ,
ಶ್ರಮ ನಿಷ್ಠೆ ಆಳಲಿ ನಿನ್ನನ್ನು ಸದಾ.

ಸುತ್ತಲೂ ಬರೀ ನಿರಾಸೆಯ ಜಾಲ,
ಆತ್ಮ ಬಲದಿ ಮುನ್ನುಗ್ಗು ಸದಾ ಕಾಲ.

ಅಳಿಯ ಬೇಡ ಸುಖ ಹಣದ ಹಾದಿಯಲಿ,
ಕಳೆಯ ಬೇಡ ಸುಖ ಅಂತಸ್ತಿನ ಹೊದಿಕೆಯಲಿ.
 
ದೂರ ದೃಷ್ಟಿಯೊಂದಿರಲಿ ಪ್ರತಿ ಕಾರ್ಯದಿ,
ಗೆಲುವು ನಿಂದೆ ಆಗ ಪ್ರತಿ ಸರದಿ.

No comments:

Post a Comment